ಚಿಕ್ಕ ಕುಟುಂಬಗಳಿಂದ ಅನೇಕ ರೀತಿಯ ಸೌಲಭ್ಯಗಳು ಪಡೆಯಬಹುದಾಗಿದೆ ಚಿಕ್ಕ ಕುಟುಂಬವು ಚೊಕ್ಕ ಕುಟುಂಬವಾಗಿದ್ದು ಸುಖ-ಕುಟುಂಬವಾಗಿರುತ್ತದೆ ಎಂದು, ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದ ವೈದೇಧಿಕಾರಿ ಡಾ. ಸಿ ಎಸ್ ಹಿರೇಮಠ ಆಶಯ ವ್ಯಕ್ತಪಡಿಸಿದರು.
ಚಿಕ್ಕ ಕುಟುಂಬಗಳಿಂದ ಅನೇಕ ರೀತಿಯ ಸೌಲಭ್ಯಗಳು ಪಡೆಯಬಹುದಾಗಿದೆ ಚಿಕ್ಕ ಕುಟುಂಬವು ಚೊಕ್ಕ ಕುಟುಂಬವಾಗಿದ್ದು ಸುಖ-ಕುಟುಂಬವಾಗಿರುತ್ತದೆ ಎಂದು, ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದ ವೈದೇಧಿಕಾರಿ ಡಾ. ಸಿ ಎಸ್ ಹಿರೇಮಠ ಆಶಯ ವ್ಯಕ್ತಪಡಿಸಿದರು.
ಕುಕನೂರು :
ಚಿಕ್ಕ ಕುಟುಂಬಗಳಿಂದ ಅನೇಕ ರೀತಿಯ ಸೌಲಭ್ಯಗಳು ಪಡೆಯಬಹುದಾಗಿದೆ ಚಿಕ್ಕ ಕುಟುಂಬವು ಚೊಕ್ಕ ಕುಟುಂಬವಾಗಿದ್ದು ಸುಖ-ಕುಟುಂಬವಾಗಿರುತ್ತದೆ ಎಂದು, ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದ ವೈದೇಧಿಕಾರಿ ಡಾ. ಸಿ ಎಸ್ ಹಿರೇಮಠ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಶ್ವದಲ್ಲೇ ಭಾರತ ದೇಶ ಎಂದು ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿದ್ದು ಸುಮಾರು 130 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ, ದೇಶದ ಜನರು ಪ್ರಸ್ತುತ ದಿನಮಾನಗಳಲ್ಲಿ ಕೀರ್ತಿಗೆ ಒಬ್ಬ ಮಗ ಆರತಿಗೆ ಒಬ್ಬ ಮಗಳು ಎಂಬ ನಾಲ್ನು ನುಡಿಯಂತೆ ತಮ್ಮ ಕುಟುಂಬವನ್ನು ಚಿಕ್ಕ ಕುಟುಂಬ ವಾಗಿಸಬೇಕಾಗಿದ್ದು, ಚಿಕ್ಕದಾದ ಕುಟುಂಬ ವಿದ್ದರೆ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲಾ ಕುಟುಂಬಗಳ ಮಕ್ಕಳು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಬಲರಾಗಬಹುದಾಗಿದೆ. ಜನಸಂಖ್ಯಾ ನಿಯಂತ್ರಣದಿಂದ ಅನಕ್ಷರತೆ ಪ್ರಮಾಣ ಕಡಿಮೆಯಾಗಿ ಸಾಕ್ಷರತಾ ಪ್ರಮಾಣ ಹೆಚ್ಚಾಗಲಿದ್ದು, ಎಲ್ಲರಿಗೂ ಸರ್ಕಾರದ ಸೌಲಭ್ಯಗಳು ನೇರವಾಗಿ ದೊರೆಯಲಿದ್ದು ಚಿಕ್ಕ ಕುಟುಂಬವಾಗಿರಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಶಿವಾನಂದ್ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನ್ನಪೂರ್ಣ ಸುರೇಶ್, ಮಂಗಳೇಶ್ ಬಂಡಿ ,ಶರಣಪ್ಪ, ಆರೋಗ್ಯ ನಿರೀರ್ಕ್ಷಣಾಧಿಕಾರಿಗಳಾದ ವೀರಭದ್ರಪ್ಪ ಬೋರಾರಿ ಸಾಹೇಬಣ್ಣ ಗುಂಟೂರ್ ಅರವಿಂದ ಮಾಳ್ಗೆ, ಮುಂತಾದ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಆಶಾ ಕಾರ್ಯಕರ್ತರು ಬಾಣಂತಿಯರು ಹಾಜರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0